ಈ ಕೋರ್ಸ್ ಒಳಗೊಂಡಿದೆ
(ಪರಿಚಯ)
ಪುಸ್ತಕವನ್ನು ಬರೆಯಬೇಕು ಎಂದರೆ ಉತ್ತಮ ಕವಿ ಆಗಿರಬೇಕು ಮತ್ತು ಅಗಾಧ ಪ್ರತಿಭೆಯನ್ನು ಹೊಂದಿರಬೇಕು ಎಂಬ ನಿಯಮವೇನೂ ಇಲ್ಲ. ಪುಸ್ತಕವನ್ನು ಯಾರು ಬೇಕಾದರೂ ಸಹ ಬರೆಯಬಹುದು ಪುಸ್ತಕಗಳು ಪೀಳಿಗೆಗಳ ನಡುವೆ ಮಾಹಿತಿಯ ಕೊಂಡಿಯಂತೆ ವರ್ತಿಸುತ್ತದೆ.
ನಿಮ್ಮ ಜೀವನದ ಕಥೆಯನ್ನು ಅಥವಾ ನಿಮ್ಮ ಬಿಸಿನೆಸ್ ನ ಕಥೆಯನ್ನು ನೀವು ಬಹಳ ವರ್ಷಗಳ ಕಾಲ ಜೀವಂತವಾಗಿ ಇಡಲು ಬಯಸಿದ್ದರೆ, ಅದನ್ನು ಪುಸ್ತಕದ ರೂಪದಲ್ಲಿ ತರುವುದು ಒಂದು ಉತ್ತಮ ಆಲೋಚನೆ ಎಂದು ಹೇಳಬಹುದು. ಉತ್ತಮ ಪುಸ್ತಕವನ್ನು ಬರೆಯಲು ಬರವಣಿಗೆಯನ್ನು ವೃತ್ತಿಯಾಗಿಸಿಕೊಳ್ಳಬೇಕು ಎಂಬ ನಿಯಮವೇನೂ ಇಲ್ಲ. ಬರವಣಿಗೆಯನ್ನು ಪ್ರವೃತ್ತಿಯಾಗಿಸಿ ಕೊಂಡು ಸಹ ಬಹಳಷ್ಟು ಮಂದಿ ಖ್ಯಾತಿಯನ್ನು ಪಡೆದಿದ್ದಾರೆ.
ಈ ಕೋರ್ಸ್ ನ ಮಾರ್ಗದರ್ಶಕರು ಡಾ।। ಎಚ್. ಎಸ್ ವೆಂಕಟೇಶ್ ಮೂರ್ತಿ ಅವರು. ಇವರು ಕರ್ನಾಟಕ ಕಂಡ ಅತ್ಯುತ್ತಮ ಮತ್ತು ಹೆಸರಾಂತ ಕವಿ ಮತ್ತು ಬರಹಗಾರರು. ಇವರು 2019 ರಲ್ಲಿ ಕರ್ನಾಟಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಸಹ ಆಗಿದ್ದರು. ಇವರ ಸಹಾಯದಿಂದ ffreedom ಅಪ್ಲಿಕೇಶನ್ “ರೈಟರ್ ಕೋರ್ಸ್ - ನೀವೂ ಕೂಡ ಬರಹಗಾರರಾಗಬಹುದು” ಎಂಬ ಕೋರ್ಸ್ ಅನ್ನು ಸಿದ್ಧಪಡಿಸಿದೆ. ನೀವೂ ಸಹ ಈ ಕೋರ್ಸ್ ಅನ್ನು ಪಡೆಯುವ ಮೂಲಕ ಬರವಣಿಗೆ ಕುರಿತಂತೆ ಉತ್ತಮ ಜ್ಞಾನವನ್ನು ಪಡೆದುಕೊಳ್ಳಬಹುದು.