ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಬಿ. ಬಾಲರಾಜು, ಬದುಕಿನಲ್ಲಿ ಏನು ಸಾಧ್ಯವೇ ಇಲ್ಲ ಎಂದು ಅಲೋಚನೆ ಮಾಡುವವರಿಗೆ ಇವರ ಸಾಧನೆಯೇ ಕೈಗನ್ನಡಿ. ಕಡು ಬಡತನದಲ್ಲಿ ಹುಟ್ಟಿದ ಇವರು ಇಂದು 18 ಎಕರೆ ಜಾಗದ ನರ್ಸರಿಗೆ ಮಾಲೀಕರು. ಬದುಕಿನಲ್ಲಿ ಸಾಕಷ್ಟು ಆಸೆ ಇಟ್ಟುಕೊಂಡ ಇವರು ಮೊದಲಿಗೆ ಮಾಡಿದ್ದು ಲಾರಿಯಲ್ಲಿ ಕೂಲಿ ಕೆಲ್ಸ. ನಂತರ ಲಾರಿ ಚಾಲಕನಾಗಬೇಕು ಅಂದುಕೊಂಡಿದ್ರು. ಆದ್ರೆ ನಂತರ ಹೋಗಿದ್ದು ಪಕ್ಕದ ರಾಜ್ಯದ ಪುಣೆ ನಗರಕ್ಕೆ. ಅಲ್ಲಿ ಸಂಬಂಧಿಯೊಬ್ಬರ ನರ್ಸರಿಯಲ್ಲಿ ಕೆಲ್ಸ ಮಾಡುತ್ತಾರೆ. ಹೀಗೆ ಸುಮಾರು ವರ್ಷಗಳು ಅಲ್ಲಿಯೇ ಇದ್ದಂತಹ ಬಾಲರಾಜು ಮರಳಿ ಬೆಂಗಳೂರಿಗೆ ಹಿಂದಿರುಗುತ್ತಾರೆ. ಅಗ ಅವರು ಬದುಕಿಗಾಗಿ...
... ಏನಾದ್ರೂ ಕೆಲ್ಸ ಮಾಡುವುದು ಅನಿವಾರ್ಯವಾಗುತ್ತೆ. ಆದ್ರೆ ಬೇರೆಯವರ ಬಳಿ ಆಳಾಗಿ ದುಡಿಯುವುದಕ್ಕೆ ಮುಂದಾಗದೇ ತಮ್ಮದೇ ಅಪಾರ ಅನುಭವದಿಂದ ಕೇವಲ 20 ಗುಂಟೆ ಜಾಗದಲ್ಲಿ ನರ್ಸರಿ ಆರಂಭಿಸುತ್ತಾರೆ. ಪತ್ನಿ ಜೊತೆಗೂಡಿ ಹಗಲು ಇರುಳು ದಣಿವರಿಯದಂತೆ ದುಡಿಯುತ್ತಾರೆ. ಹಂತ ಹಂತವಾಗಿ ಪ್ರಗತಿ ಕಂಡುಕೊಂಡ ಇವರು ಇಂದು ತಮ್ಮದೇ 18 ಎಕರೆಯಲ್ಲಿ ಭೂಮಿಯಲ್ಲಿ ನರ್ಸರಿ ಬಿಸಿನೆಸ್ ಮಾಡುತ್ತಿದ್ದಾರೆ. ಸಸಿಗಳನ್ನು ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ ವಿದೇಶಗಳಿಗೆ ರಫ್ತು ಕೂಡ ಮಾಡುತ್ತಿದ್ದಾರೆ. ಅಂದು ಲಾರಿ ಚಾಲಕನಾಗಬೇಕು ಎಂದುಕೊಂಡವರು ಈಗ ಹಲವು ಲಾರಿಗಳಿಗೆ ಮಾಲೀಕರಾಗಿದ್ದಾರೆ.
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್ಫಾರ್ಮ್ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ