ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ದಯಾನಂದ್ ಆರ್.ಎ, ಯಶಸ್ವಿ ಹಿರಿಯ ಪ್ರಗತಿಪರ ಕೃಷಿಕ. ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೇವರ ಮರಕುಂಟೆ ಅನ್ನೋ ಗ್ರಾಮದಲ್ಲಿ.ಡಿಗ್ರಿ ಮುಗಿಸಿದ ನಂತರ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಇವರಿಗೆ ಸಬ್ ಇನ್ಸ್ಪೆಕ್ಟರ್ ಆಗೋ ಕನಸಿತ್ತು. ಆದರೂ ಅನಿವಾರ್ಯ ಕಾರಣದಿಂದ ಜೀವನೋಪಾಯಕ್ಕಾಗಿ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡ್ತಿದ್ದ್ದರು.ಜಿಮ್ನಾಸ್ಟಿಕ್ ಪ್ಲೇಯರ್ ಆಗಿದ್ದರೂ ಕೂಡ ಪೊಲೀಸ್ ಕೆಲಸ ಸಿಗಲಿಲ್ಲ. ಒಂದು ದಿನ ತೋಟಗಾರಿಕೆ ಮೇಳ ನಡೆಯುತ್ತಿದ್ದದ್ದು ನೋಡಿ ಕುತೂಹಲದಿಂದ ಅಲ್ಲಿಗೆ ಹೋಗಿದ್ರು ಇದು ಇವರ ಬದುಕಿನ ದಿಕ್ಕನ್ನೇ ಬದಲಿಸಿತು. ಕೃಷಿ ಭೂಮಿ...
... ಮಹತ್ವ ಅರಿತ ಇವರು ಒಂದು ಕ್ಷಣವೂ ವ್ಯರ್ಥ ಮಾಡದೆ ಸೀದಾ ಬೆಂಗಳೂರಿನಿಂದ ಊರಿನ ಬಸ್ಸನ್ನೇರಿದ್ದರು. ಹೇಳಿ ಕೇಳಿ ಅದು ರಣ ಬಿಸಿಲು ತಾಂಡವವಾಡುವ ಪ್ರದೇಶ. ಊರಿನಲ್ಲಿ ಕೃಷಿ ಮಾಡ್ತೀನಿ ಅಂದಾಗ ದಯಾನಂದ್ ಅವರನ್ನು ಒಂದಷ್ಟು ಜನ ಬೈದಿದ್ದು ಇದೆ. ಆದ್ರೆ ದೃಢ ಸಂಕಲ್ಪ ಮಾಡಿದ್ದ ದಯಾನಂದ್ ಹಿಂದೇಟು ಹಾಕದೆ ಕೃಷಿ ಬಗ್ಗೆ ಆಳವಾಗಿ ಅರಿತು ಬೆಂಗಾಡಿನಲ್ಲಿ ಅದ್ಭುತ ತೋಟ ಮಾಡಿ ಈ ಪ್ರದೇಶದಲ್ಲೂ ಇಂಥ ತೋಟ ಮಾಡಬಹುದಾ ಅನ್ನೋ ಅಚ್ಚರಿ ಸೃಷ್ಟಿಸಿದ್ದಾರೆ. ಒಂದೇ ಭೂಮಿಯಲ್ಲಿ ಅರಣ್ಯ ಕೃಷಿ, ಹಣ್ಣಿನ ಕೃಷಿ, ತರಕಾರಿ ಕೃಷಿ, ನಾಟಿ ಕೋಳಿ ಸಾಕಣೆ, ಕುರಿ- ಮೇಕೆ ಸಾಕಣೆ ಎಲ್ಲವೂ ಸೇರಿ ಸಮಗ್ರ ಕೃಷಿ ಮಾಡಿ ಅನೇಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್ಫಾರ್ಮ್ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ