ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಜ್ಯೋತಿ ಪ್ರಕಾಶ್ ಜಿ, ಕರ್ನಾಟಕದ ಯಶಸ್ವಿ ಹಣ್ಣಿನ ಕೃಷಿಕ. ಆ್ಯಪಲ್ ಬೆಳೆಯೋದ್ರಲ್ಲಿ ಎಕ್ಸ್ಪರ್ಟ್. ಹಿಮಾಚಲ ಪ್ರದೇಶಗಳಂತಹ ಚಳಿ ಪ್ರದೇಶದಲ್ಲಿ ಮಾತ್ರ ಬೆಳೆಯುತ್ತಿದ್ದ ಆ್ಯಪಲ್ ಬೆಳೆಯನ್ನ ತಮ್ಮೂರಲ್ಲಿ ಬೆಳೆದು ಯಶಸ್ವಿಯಾದ ಸಾಹಸಿಗ. ಚಿತ್ರದುರ್ಗದಂತಹ ಉಷ್ಣ ವಾತಾವರಣದಲ್ಲೂ ಆ್ಯಪಲ್ ಕೃಷಿ ಮಾಡಿ ಸಕ್ಸಸ್ ಆಗಬಹುದು ಅಂತಾ ತೋರಿಸಿಕೊಟ್ಟ ಸಾಧಕ. ಕಾನೂನು ಪದವಿ ಪಡೆದು ಅಡ್ವೊಕೇಟ್ ಆಗಿದ್ದರೂ ಕೂಡಾ ಕೃಷಿ ಕಡೆಗಿನ ಒಲವಿನಿಂದ ಕೃಷಿಯತ್ತ ಜಾಸ್ತಿ ಆಕರ್ಷಿತರಾಗಿ ಬೇರೆ ಬೇರೆ ಬೆಳೆಗಳನ್ನು ಬೆಳೆಯೋದಕ್ಕೆ ಪ್ರಾರಂಭಿಸಿದ್ರು. ಕೃಷಿಯಲ್ಲಿ ಏನಾದ್ರೂ ಸಾಧನೆ ಮಾಡಬೇಕು ಅಂದುಕೊಂಡಿದ್ದ ...
... ಜ್ಯೋತಿ ಪ್ರಕಾಶ್ ಅವರಿಗೆ ಹೊಳೆದಿದ್ದು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಬೆಳೆಯೋ ಆ್ಯಪಲ್. ನಂತರ ಆ ಪ್ರದೇಶಗಳಿಗೆ ಭೇಟಿ ಕೊಟ್ಟು ಅಧ್ಯಯನ ನಡೆಸಿ ತಮ್ಮ ಜಮೀನಿನಲ್ಲಿ ಬೆಳೆಯೋದಕ್ಕೆ ಪ್ರಾರಂಭಿಸಿದರು. ಈಗ ಆಪಲ್ ಕೃಷಿಯಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಆ್ಯಪಲ್ ಮಾತ್ರವಲ್ಲ ಜತೆಗೆ 9 ಎಕರೆಯಲ್ಲಿ ಅಡಕೆ ಕೃಷಿ ಕೂಡಾ ಮಾಡ್ತಿದ್ದಾರೆ.ಇವ್ರ ಕೃಷಿ ಸಾಧನೆಗೆ ಬೆಸ್ಟ್ ಫಾರ್ಮರ್ ಅವಾರ್ಡ್ ಪಡ್ಕೊಂಡಿದ್ದಾರೆ. ಯಾವ ಪ್ರದೇಶಕ್ಕೆ ,ಯಾವ ಹವಾಮಾನಕ್ಕೆ ಯಾವ ಬೆಳೆ ಸೂಕ್ತ, ಅದನ್ನು ಬೆಳೆಯೋದು ಹೇಗೆ, ಮಾರಾಟ ಮಾಡೋದು ಹೇಗೆ ಅನ್ನೋದರ ಬಗ್ಗೆ ಅಪಾರ ಜ್ಞಾನ ಹೊಂದಿದ್ದು ಹಣ್ಣಿನ ಕೃಷಿಯಲ್ಲಿ ಮಾಸ್ಟರ್ ಆಗಿದ್ದಾರೆ.
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್ಫಾರ್ಮ್ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ