ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಮುತ್ತಣ್ಣ ಬಿ ಪೂಜಾರ್, ಕೃಷಿಯಲ್ಲೇ ವರ್ಷಕ್ಕೆ ಕೋಟಿಗೂ ಅಧಿಕ ಆದಾಯ ಗಳಿಸುತ್ತಿರೋ ಯಶಸ್ವಿ ರೈತ. ತಮ್ಮ 37 ಎಕರೆ ಭೂಮಿಯಲ್ಲಿ, ಅಡಿಕೆ, ಕಾಳು ಮೆಣಸು, ಮಾವು, ಸಪೋಟಾ, ಪಶು ಸಂಗೋಪನೆ, ಮೀನು ಸಾಕಣಿಕೆ, 17 ಬಗೆಯ ಭತ್ತದ ಬೆಳೆ, 1000 ಕುರಿ ಸಾಕಣಿಕೆ, ಜೇನು ಕೃಷಿ , ಸಾವಯವ ಗೊಬ್ಬರ ಹೀಗೆ ಹೇಳ್ತಾ ಹೋದ್ರೆ ಇನ್ನೂ ಸಾಕಷ್ಟು ಇವೆ. ಇವರ ಕೃಷಿ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳೂ ಕೂಡ ಬಂದಿವೆ. ಮುತ್ತಣ್ಣ ಅವರು, ನೀವು ಯಾವ ಪ್ರದೇಶದಲ್ಲಿ ಇದ್ದೀರಾ ಅದಕ್ಕೆ ಅನುಗುಣವಾಗಿ ಯಾವ ಬೆಳೆ ಉತ್ತಮ ಅನ್ನುವುದರ ಬಗ್ಗೆಯೂ...
... ಉತ್ತಮ ಮಾಹಿತಿ ನೀಡಬಲ್ಲರು. ಹಾಗೇ ನೀವು ಅರಣ್ಯ ಕೃಷಿ ಅಂದ್ರೆ ಶ್ರೀಗಂಧ, ಸಿಲ್ವರ್, ಸಾಗುವಿನಿ ಅಂತಹ ಮರಗಳನ್ನ ಬೆಳೆಯೋದಾದ್ರೂ ಅದರಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ತೋಟಗಾರಿಕಾ ಬೆಳೆ, ಪಶು ಸಂಗೋಪನೆ, ಮಸಾಲಾ ಪದಾರ್ಥಗಳ ಬೆಳೆಯನ್ನು ಬೆಳೆಯುವುದಿರಬಹುದು, ಹಾಗೇ ಬೆಳೆಗಳನ್ನ ಮಾರ್ಕೆಟಿಂಗ್ ನಿಂದ ಮಾರಾಟ ಮಾಡೋವರೆಗೂ, ಯಾವುದೇ ಕೃಷಿ ಮಾಡುವುದಿದ್ರೂ ಮುತ್ತಣ್ಣ ಉತ್ತಮ ಮಾರ್ಗದರ್ಶನ ನೀಡಬಲ್ಲರು. ನಡೆದಾಡುವ ಕೃಷಿ ಯೂನಿವರ್ಸಿಟಿಯೇ ಆಗಿರುವ ಮುತ್ತಣ್ಣ ಅವರಿಂದ ನೀವು ಕೃಷಿಗೆ ಸಂಬಂಧಪಟ್ಟಂತೆ ಯಾವುದೇ ಮಾಹಿತಿಯನ್ನೂ ಕೂಡ ಪಡೆಯಬಹುದು.
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್ಫಾರ್ಮ್ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ