ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ರಮೇಶ್ ಜಿ, ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಅಂಚೆಪಾಳ್ಯದ ಹಿರಿಯ ಪ್ರಗತಿಪರ ಕೃಷಿಕ. ತಮ್ಮ 20 ಎಕರೆ ಜಮೀನಿನಲ್ಲಿ ತರಹೇವಾರಿ ಹಣ್ಣು, ತರಕಾರಿಗಳನ್ನ ಬೆಳೆದು ಉತ್ತಮ ಆದಾಯ ಗಳಿಸುತ್ತಿರುವ ರೈತ. ಅಂದಹಾಗೆ ಈ 20 ಎಕರೆ ಕಲ್ಲು ಬಂಡೆಗಳ ಭೂಮಿ, ಆದರೂ ಇಲ್ಲಿ ಕೃಷಿ ಮಾಡಿ ಗೆದ್ದಿದ್ದಾರೆ. ಇನ್ನೊಂದು ವಿಶೇಷ ಏನಂದ್ರೆ, ಇಂಥ ಭೂಮಿಯಲ್ಲಿ ಶೇ.60ರಷ್ಟು ಸಾವಯವ ಕೃಷಿ ಮಾಡುತ್ತಿದ್ದಾರೆ. ಕಲ್ಲಂಗಡಿ, ಪಪ್ಪಾಯಿ, ಬಟರ್ ಫ್ರೂಟ್, ಸಿಹಿ ನಿಂಬೆ, ನಾಗಪುರ ಕಿತ್ತಳೆ, ಸೀತಾಫಲ, ಪೇರಲ, ನಿಂಬೆ ಸೇರಿದಂತೆ ಹತ್ತಾರು ಬಗೆಯ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಅಲ್ಲದೇ ವಿವಿಧ ತರಕಾರಿ ಬೆಳೆಗಳನ್ನು...
... ಕೂಡ ಬೆಳೆದಿದ್ದು, ತೆಂಗಿನ ತೋಟವನ್ನೂ ಕೂಡ ಮಾಡಿದ್ದಾರೆ. ತಾವು ಬೆಳೆದ ಬೆಳೆಯನ್ನ ಮಾರಾಟ ಮಾಡೋದಕ್ಕೆ ಸೂಪರ್ ಮಾರ್ಕೆಟ್, ಹಾಪ್ ಕಾಮ್ಸ್, ಬಿಗ್ ಬಾಸ್ಕೆಟ್ ಮತ್ತು ಇತರ ಔಟ್ಲೆಟ್ಗಳೊಂದಿದೆ ಟೈ ಅಪ್ ಕೂಡ ಮಾಡಿಕೊಂಡಿದ್ದಾರೆ. ರಮೇಶ್ ಜಿ ಕೃಷಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಹಲವು ಪ್ರಶಸ್ತಿಗಳು ಕೂಡ ಒಲಿದು ಬಂದಿದೆ. ಜಿಲ್ಲಾ ಪ್ರಗತಿಪರ ರೈತ ಪ್ರಶಸ್ತಿ, ಜಿಕೆವಿಕೆಯಿಂದ ಡಾ.ಮರಿಗೌಡ ತೋಟಗಾರಿಕೆ ರಾಜ್ಯ ಪ್ರಶಸ್ತಿ", "ದ್ವಾರಕನಾಥ್ ರಾಜ್ಯ ಪ್ರಶಸ್ತಿ ಮತ್ತು ಬಾಗಲಕೋಟ ತೋಟಗಾರಿಕೆ ಇಲಾಖೆಯಿಂದ "ಕೃಷಿ ಪಂಡಿತ್ ಉದಯೋನ್ಮುಖಿ ಪ್ರಶಸ್ತಿ"ಗಳಿಗೆ ಇವರು ಬಾಜನರಾಗಿದ್ದಾರೆ.
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್ಫಾರ್ಮ್ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ