ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಕರಾವಳಿಯಲ್ಲಿ ಕಿರುಜೇನು ಅಂದ್ರೆ ವೆಂಕಟಕೃಷ್ಣ ಭಟ್ ಅನ್ನುವಷ್ಟರ ಮಟ್ಟಿಗೆ ಫೇಮಸ್ ಈ ಜೇನು ಕೃಷಿಕ. ಹೌದು.., ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನ ವೆಂಕಟಕೃಷ್ಣ ಭಟ್ ಕಳೆದ 15 ವರ್ಷಗಳಿಂದ ಜೇನು ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಓದು ಮುಗಿದ ಮೇಲೆ ಕೆಲಸಕ್ಕೆ ಹೋಗುವ ಯೋಚನೆಯನ್ನೂ ಮಾಡದ ಇವರು ನೇರವಾಗಿ ಧುಮುಕಿದ್ದು ಕೃಷಿ ಜಮೀನಿಗೆ. ಆದ್ರೆ ಹೆಚ್ಚಾಗಿ ಆಕರ್ಷಿಸಿದ್ದು ಜೇನು ಕೃಷಿ. ಪರಿಣಾಮ ಕೇವಲ 1 ಪೆಟ್ಟಿಗೆಯಿಂದ ಕಿರು ಜೇನು ಕೃಷಿ ಆರಂಭಿಸಿದ್ರು. ಪ್ರಸ್ತುತ 250 ರಿಂದ 350 ಜೇನು ಪೆಟ್ಟಿಗೆಗಳಿದೆ. ವಿಶೇಷ ಅಂದ್ರೆ ಬಳಸಿ ಬಿಸಾಕಿದ್ದ ತೆಂಗಿನ ಕಾಯಿ...
... ಚಿಪ್ಪು ಮತ್ತು ಬಿದಿರನ್ನೇ ಜೇನು ಗೂಡುಗಳನ್ನಾಗಿಸಿದ್ದಾರೆ. ಜೇನು ಕೃಷಿಯಿಂದಾಗಿಯೇ ಇವರನ್ನು ಹಲವಾರು ಸಂಘ ಸಂಸ್ಥೆಗಳು ಗುರುತಿಸುವಂತಾಗಿದೆ. ಕಿರುಜೇನಿನ ಅತ್ಯುತ್ತಮ ಮಾರ್ಗದರ್ಶಕರಾಗಿ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಅಲ್ಲದೆ 3.5 ಎಕರೆ ಜಮೀನಿನಲ್ಲಿ ಕಾಳುಮೆಣಸು, ತೆಂಗು, ಅಡಿಕೆ ಕೃಷಿ ಸೇರಿದಂತೆ ವೈವಿಧ್ಯಮಯ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಹೆಚ್ಚುವರಿಯಾಗಿ, ಡೈರಿ ಫಾರ್ಮ್ ನಡೆಸುತ್ತಾರೆ. ಉತ್ಪನ್ನಗಳನ್ನು ಕರ್ನಾಟಕದ ಒಳಗೆ ಮತ್ತು ರಾಜ್ಯದ ಹೊರಗೂ ಮಾರಾಟ ಮಾಡುತ್ತಾರೆ. ಈ ಎಲ್ಲ ಕೃಷಿ ಬಗ್ಗೆ ವೆಂಕಟಕೃಷ್ಣ ಭಟ್ ಅವರಿಗೆ ಅಪಾರ ಅನುಭವ ಇದೆ.
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್ಫಾರ್ಮ್ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ