ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
"ಆಡು ಮುಟ್ಟದ ಸೊಪ್ಪಿಲ್ಲ ಜಿ.ನಂದೀಶ್ ಮಾಡದ ಕೃಷಿಯಿಲ್ಲ" ಅನ್ನಬಹುದು. ಯಾಕಂದ್ರೆ ಚಿಕ್ಕಬಳ್ಳಾಪುರದ ಗೌರಿಬಿದನೂರಿನವರಾದ ನಂದೀಶ್ ಹಣ್ಣಿನ ಕೃಷಿ ಮಾಡ್ತಾರೆ, ಹೂವಿನ ಬೆಳೆ, ಕುರಿ ಸಾಕಣೆ, ಮೆಡಿಕಲ್ ಶಾಪ್ ಮಾಲೀಕ, ಅಡಿಕೆ ಬೆಳೆಗಾರ ಒಟ್ಟಾರೆಯಾಗಿ ಕೃಷಿಯಲ್ಲಿ ಆಲ್ ರೌಂಡರ್ . ತನ್ನ 6 ಎಕರೆ ಜಾಗದಲ್ಲಿ ಸುಗಂಧರಾಜ ಹೂವಿನ ಕೃಷಿ ಮಾಡುತ್ತಿರುವ ಇವರು. ಅದೊಂದರಲ್ಲೆ ಎಕರಗೆ 7 ಲಕ್ಷ ಲಾಭ ಗಳಿಸುತ್ತಿದ್ದಾರೆ. ಕೃಷಿಯಲ್ಲಿ ಹೆಚ್ಚಿನ ಆದಾಯಕ್ಕಾಗಿ ಕುರಿ ಸಾಕಾಣೆಯನ್ನ ಆರಂಭಿಸಿ, ಮೊದಲು 40 ಕುರಿಗಳನ್ನು ಸಾಕ್ತಾರೆ, ಈಗ 100ಕ್ಕೂ ಅಧಿಕ...
... ಕುರಿ ಸಾಕಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೇ ಇತ್ತೀಚೆಗೆ 2 ಎಕರೆಯಲ್ಲಿ ಅಡಿಕೆ ಕೃಷಿಯನ್ನೂ ಆರಂಭಿಸಿದ್ದಾರೆ. ಈ ಮೊದಲು ಸೀಸನ್ಗೆ ಅನುಗುಣವಾಗಿ ಬೇರೆ ಬೇರೆ ಹಣ್ಣುಗಳನ್ನೂ ಕೂಡ ಬೆಳೆದಿದ್ದಾರೆ. ಹೀಗೆ ಒಬ್ಬ ರೈತ ಯಾವ ರೀತಿ ಪ್ರಯತ್ನ ಪಟ್ಟು ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದಕ್ಕೆ ನಂದೀಶ್ ಉತ್ತಮ ಉದಾಹಾರಣೆ. ಹಣ್ಣಿನ ಕೃಷಿ, ಕುರಿ ಸಾಕಾಣೆ , ಹೂವಿನ ಬೆಳೆ, ಅಡಿಕೆ ಕೃಷಿ ಸೀಸನ್ ತಕ್ಕಂತೆ ಬೆಳೆ, ಬೆಳೆಗಳನ್ನು ಸೂಕ್ತ ಬೆಲೆಗೆ ಮಾರಾಟ ಮಾಡೋದು, ಹೀಗೆ ಎಲ್ಲದರ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದಾರೆ.
ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್ಫಾರ್ಮ್ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ