"ಸಾವಯವ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯುವುದು ಹೇಗೆ" ಎಂಬ ನಮ್ಮ ಈ ವಿಶೇಷ ಕೋರ್ಸ್ಗೆ ನಿಮಗೆ ಸುಸ್ವಾಗತ, ಸಾವಯವ ಕೃಷಿಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನದೊಂದಿಗೆ ನಿಮ್ಮನ್ನು ಸಜ್ಜುಗೊಳಿಸಲು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಭಾರತ ಮತ್ತು ಪ್ರಪಂಚದಾದ್ಯಂತ ಸಾವಯವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಲಾಭದಾಯಕವಾದ ಈ ಬಿಸಿನೆಸ್ ಅನ್ನು ಮಾಡಲು ಇದು ಉತ್ತಮ ಸಮಯವಾಗಿದೆ.
ನಮ್ಮ ಈ ಕೋರ್ಸ್ ನ ಮಾರ್ಗದರ್ಶಕರು ಸಾವಯವ ಕೃಷಿ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿದ್ದಾರೆ, ಸಂಶೋಧನೆ, ಬೋಧನೆ ಮತ್ತು ಸಲಹೆಯಲ್ಲಿ ನೀಡುವುದರಲ್ಲಿ ಅವರು 15 ವರ್ಷಗಳ ಸುಧೀರ್ಘ ಅನುಭವವನ್ನು ಹೊಂದಿದ್ದಾರೆ. ಸಾವಯವ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮತ್ತು ಉತ್ತಮ ಇಳುವರಿಯನ್ನು ಸಾಧಿಸುವ ನಿಟ್ಟಿನಲ್ಲಿ ಅವರು ಭಾರತದಾದ್ಯಂತ ಹಲವಾರು ರೈತರಿಗೆ ಸಹಾಯ ಮಾಡಿದ್ದಾರೆ ಮತ್ತು ಅವರ ಇನ್ನೋವೇಟಿವ್ ವಿಧಾನಗಳನ್ನು ಪ್ರಸ್ತುತ ವಿಶ್ವದಾದ್ಯಂತ ರೈತರು ಪುನರಾವರ್ತಿಸುತ್ತಿದ್ದಾರೆ.
ಈ ಪ್ರಾಯೋಗಿಕ, ವಿಶ್ವಾಸಾರ್ಹ ಮತ್ತು ಕಸ್ಟಮರ್ ಡ್ರಿವನ್ ಕೋರ್ಸ್ ನ ಮೂಲಕ, ಸಾವಯವ ಕೃಷಿಯಲ್ಲಿ ನಿಮ್ಮ ಇಳುವರಿಯನ್ನು ಹೆಚ್ಚಿಸಲು ನೀವು ಹಲವಾರು ಸ್ಟ್ರಾಟೆಜಿ ಮತ್ತು ಟೆಕ್ನಿಕ್ ಗಳನ್ನು ಕಲಿಯುವಿರಿ. ಇದಲ್ಲದೆ ಈ ಕೋರ್ಸ್ ಮಣ್ಣಿನ ನಿರ್ವಹಣೆ ಮತ್ತು ಬೆಳೆ ಸರದಿಯಿಂದ ಹಿಡಿದು ಕೀಟ ನಿಯಂತ್ರಣ ಮತ್ತು ಮಾರ್ಕೆಟಿಂಗ್ ಅನ್ನು ಮಾಡುವವರೆಗೆ ವ್ಯಾಪಕವಾದ ವಿಷಯಗಳನ್ನು ಒಳಗೊಂಡಿದೆ. ನೀವು ಅನುಭವಿ ರೈತರಾಗಿರಲಿ ಅಥವಾ ಇದೀಗ ಪ್ರಾರಂಭಿಸುತ್ತಿರಲಿ, ಈ ಕೋರ್ಸ್ ನಿಮಗೆ ಸಾವಯವ ಕೃಷಿ ಬಿಸಿನೆಸ್ ನಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲ ಕೌಶಲ್ಯ ಮತ್ತು ಜ್ಞಾನವನ್ನು ಒದಗಿಸುತ್ತದೆ.
ಸಾವಯವ ಕೃಷಿಯಲ್ಲಿನ ಅವಕಾಶಗಳಿಗೆ ಮಿತಿಯಿಲ್ಲ. ಹೀಗಾಗಿ ಸಾವಯವ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವುದರಿಂದ ಹಿಡಿದು ಸುಸ್ಥಿರ ಭವಿಷ್ಯಕ್ಕೆ ಕೊಡುಗೆ ನೀಡುವವರೆಗೆ ಈ ಕೋರ್ಸ್ ಎಲ್ಲ ಅಗತ್ಯ ಮಾಹಿತಿಯನ್ನು ನಿಮಗೆ ಒದಗಿಸುತ್ತದೆ. ಈ ಕೋರ್ಸ್ ಅನ್ನು ಅವರ ಅನುಭವದ ಮಟ್ಟವನ್ನು ಲೆಕ್ಕಿಸದೆಯೇ ಎಲ್ಲರೂ ಸಹ ಪ್ರವೇಶಿಸಬಹುದಾಗಿದೆ. ಈ ರೋಮಾಂಚಕಾರಿ ಪ್ರಯಾಣವನ್ನು ಪ್ರಾರಂಭಿಸಲು, ffreedom appನಲ್ಲಿನ ನಮ್ಮ ಕೋರ್ಸ್ ವೀಡಿಯೊವನ್ನು ವೀಕ್ಷಿಸಲು ಮತ್ತು ಸಾವಯವ ಕೃಷಿಯ ಅನೇಕ ಪ್ರಯೋಜನಗಳನ್ನು ತಿಳಿದುಕೊಳ್ಳಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.
ಸಾವಯವ ಕೃಷಿಯ ಪ್ರಿನ್ಸಿಪಲ್ ಗಳು ಮತ್ತು ಅದರ ಪ್ರಯೋಜನಗಳನ್ನು ಅನ್ವೇಷಿಸಿ ಮತ್ತು ಇದು ಸುಸ್ಥಿರ ಭವಿಷ್ಯಕ್ಕಾಗಿ ಏಕೆ ಅವಶ್ಯಕವಾಗಿದೆ ಎಂದು ತಿಳಿಯಿರಿ.
ಸಾವಯವ ಕೃಷಿ ಸಂಶೋಧನೆ, ಬೋಧನೆ ಮತ್ತು ಕನ್ಸಲ್ಟಿಂಗ್ ನಲ್ಲಿ 15 ವರ್ಷಗಳ ಅನುಭವವನ್ನು ಹೊಂದಿರುವ ಪ್ರಮುಖ ಪರಿಣಿತರಿಂದ ಕಲಿಯಿರಿ.
ರಾಸಾಯನಿಕ ಕೃಷಿಯಿಂದ ಸಾವಯವಕ್ಕೆ ಹೇಗೆ ಪರಿವರ್ತನೆ ಮಾಡುವುದು ಮತ್ತು ಹಾಗೆ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ಅನ್ವೇಷಿಸಿ.
ಸಾವಯವ ಕೃಷಿಯಲ್ಲಿ ಯಶಸ್ಸನ್ನು ಸಾಧಿಸಲು ಅಗತ್ಯವಿರುವ ಸಮಯದ ಬಗ್ಗೆ ಮತ್ತು ಅದರ ವಿವಿಧ ಹಂತಗಳನ್ನು ಅರ್ಥಮಾಡಿಕೊಳ್ಳಿ.
ಬೆಳೆ ಸರದಿ ಮತ್ತು ಮಣ್ಣಿನ ಆರೋಗ್ಯ ನಿರ್ವಹಣೆ ಸೇರಿದಂತೆ ಸಾವಯವ ಕೃಷಿಯಲ್ಲಿ ಇಳುವರಿಯನ್ನು ಹೆಚ್ಚಿಸಲು ಇನ್ನೋವೇಟಿವ್ ತಂತ್ರಗಳನ್ನು ಅನ್ವೇಷಿಸಿ.
ಬೆಳೆಗಳ ಬೆಳವಣಿಗೆ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಸರಿಯಾದ ನೀರು ಮತ್ತು ರಸಗೊಬ್ಬರ ನಿರ್ವಹಣೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಯಿರಿ.
ಹಾನಿಕಾರಕ ರಾಸಾಯನಿಕಗಳನ್ನು ಬಳಸದೆ ಕೀಟಗಳು ಮತ್ತು ರೋಗಗಳನ್ನು ಹೇಗೆ ತಡೆಗಟ್ಟುವುದು ಮತ್ತು ನಿರ್ವಹಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳಿ.
ಸಾವಯವ ಪ್ರಮಾಣೀಕರಣವನ್ನು ಪಡೆಯುವ ಪ್ರಕ್ರಿಯೆಯನ್ನು ಅನ್ವೇಷಿಸಿ ಮತ್ತು ಅದು ನಿಮ್ಮ ಫಾರ್ಮ್ ಮತ್ತು ಬಿಸಿನೆಸ್ ಗೆ ಹೇಗೆ ಪ್ರಯೋಜನವನ್ನು ಒದಗಿಸುತ್ತದೆ ಎಂದು ತಿಳಿಯಿರಿ.
ಸಾವಯವ ಉತ್ಪನ್ನಗಳಿಗಿರುವ ಮಾರುಕಟ್ಟೆ ಬೇಡಿಕೆ ಬಗ್ಗೆ ಜೊತೆಗೆ ಮಾರಾಟ ಮತ್ತು ಆದಾಯವನ್ನು ಹೆಚ್ಚಿಸಲು ಉಪಯುಕ್ತವಾದ ತಂತ್ರಗಳ ಬಗ್ಗೆ ತಿಳಿಯಿರಿ.
ಸಾವಯವ ಕೃಷಿಯಲ್ಲಿ ಯಶಸ್ವಿಯಾಗುವುದು ಹೇಗೆ ಮತ್ತು ನಿಮ್ಮ ಸಾವಯವ ಬಿಸಿನೆಸ್ ಅನ್ನು ಬೆಳೆಸುವುದು ಹೇಗೆ ಎಂಬುದರ ಕುರಿತು ನಮ್ಮ ಮಾರ್ಗದರ್ಶಕರಿಂದ ಅಮೂಲ್ಯವಾದ ಸಲಹೆಗಳನ್ನು ಪಡೆಯಿರಿ.

- ತಮ್ಮದೇ ಆದ ಸಾವಯವ ಕೃಷಿಯನ್ನು ಪ್ರಾರಂಭಿಸಲು ಬಯಸುತ್ತಿರುವ ಮಹತ್ವಾಕಾಂಕ್ಷಿ ರೈತರು
- ಹೊಸ ಮತ್ತು ಇನ್ನೋವೇಟಿವ್ ಸಾವಯವ ಕೃಷಿ ಪದ್ಧತಿಗಳಲ್ಲಿ ಆಸಕ್ತಿ ಹೊಂದಿರುವ ಅನುಭವಿ ರೈತರು
- ಸಾವಯವ ಕೃಷಿಯ ಬಗ್ಗೆ ಪ್ರಾಯೋಗಿಕ ಒಳನೋಟಗಳನ್ನು ತಿಳಿಯಲು ಬಯಸುವ ಕೃಷಿ ವಿದ್ಯಾರ್ಥಿಗಳು
- ಸಾವಯವ ಕೃಷಿಯ ಬಗ್ಗೆ ತಮ್ಮ ಜ್ಞಾನವನ್ನು ವಿಸ್ತರಿಸಲು ಬಯಸುವ ಕೃಷಿ ಸಲಹೆಗಾರರು
- ಸಾವಯವ ಕೃಷಿಯಲ್ಲಿ ವೃತ್ತಿಜೀವನವನ್ನು ಆರಂಭಿಸಲು ಆಸಕ್ತಿ ಹೊಂದಿರುವ ಯಾರಾದರೂ



- ಸಾವಯವ ಕೃಷಿಯ ಪ್ರಿನ್ಸಿಪಲ್ ಗಳು ಮತ್ತು ಈ ಸುಸ್ಥಿರ ಅಭ್ಯಾಸದ ಪ್ರಯೋಜನಗಳು
- ಬಯೋಡೈನಾಮಿಕ್, ಪರ್ಮಾಕಲ್ಚರ್ ಮತ್ತು ಪುನರುತ್ಪಾದಕ ಕೃಷಿ ಸೇರಿದಂತೆ ವಿವಿಧ ರೀತಿಯ ಸಾವಯವ ಕೃಷಿ
- ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯನ್ನು ಸುಧಾರಿಸಲು ಮಣ್ಣಿನ ನಿರ್ವಹಣೆ ತಂತ್ರಗಳು
- ಕೀಟಗಳು ಮತ್ತು ರೋಗಗಳನ್ನು ಕಡಿಮೆ ಮಾಡಲು ಮತ್ತು ಇಳುವರಿಯನ್ನು ಹೆಚ್ಚಿಸಲು ಬೆಳೆ ರೊಟೇಷನ್ ತಂತ್ರಗಳು.
- ಹಾನಿಕಾರಕ ರಾಸಾಯನಿಕಗಳ ಬಳಕೆಯಿಲ್ಲದೆ ಕೀಟ ಮತ್ತು ರೋಗ ನಿಯಂತ್ರಣ ವಿಧಾನಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ನಿಮ್ಮ ಮೊಬೈಲ್ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಜಿ. ರಾಮಚಂದ್ರ, ಹಿರಿಯ ಕೃಷಿಕ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲೂಕಿನ ಅರವಿಂದ ನಗರದವರು. ಡಿಪ್ಲೋಮಾ ಓದಿನ ನಂತರ ಉದ್ಯೋಗದ ಕಡೆಗೆ ಹೋಗದೆ ತನ್ನ ತಂದೆ ಪಾಲಿನ ಭೂಮಿಯಲ್ಲಿ ಕೃಷಿ ಆರಂಭಿಸಿದರು. ಸಾಂಪ್ರದಾಯಿಕ ಕೃಷಿಯನ್ನ ಬದಿಗಿರಿಸಿ ಪಶುಸಂಗೋಪನೆಗೆ ಮುಂದಾದ್ರು. ಪರಿಣಾಮ ಇಂದು ಗೀರ್ ಸೇರಿದಂತೆ ಹಲವು ತರಹದ ಹಸು,ಕೋಳಿಗಳನ್ನು ಸಾಕ್ತಿದ್ದು ಪಶುಸಂಗೋಪನೆಯಿಂದಲೇ ಲಕ್ಷ ಲಕ್ಷ ಸಂಪಾದಿಸ್ತಿದ್ದಾರೆ.
ವರುಣ್ ಪಿ.ಆರ್. ಹೈನುಗಾರಿಕೆಯಲ್ಲಿ ಎಕ್ಸ್ಪರ್ಟ್. ಉನ್ನತ ವಿದ್ಯಾಭ್ಯಾಸ ಮಾಡಿದ್ರು ಕೂಡ ಉದ್ಯೋಗಕ್ಕೆ ತೆರಳದೆ ತಂದೆ ಕಷ್ಟಪಟ್ಟು ಕಟ್ಟಿದ್ದ ಹೈನುಗಾರಿಕೆಯನ್ನೇ ಮುಂದುವರೆಸಿಕೊಂಡು ಬಂದವರು. 50 ಹೆಚ್.ಎಫ್ ಹಸುಗಳ ಹೈನುಗಾರಿಕೆ ಮಾಡಿ ಹಾಲು, ಗೊಬ್ಬರದಿಂದ ಅತ್ಯುತ್ತಮ ಆದಾಯಗಳಿಸ್ತಿದ್ದಾರೆ. ಒಂದು ಹಸುವಿನಿಂದ 50 ಹಸುವಿನವರೆಗೆ ಬೆಳೆದ ಇವರ ಉದ್ಯಮ ಕೋಟಿ ದುಡಿಮೆ ಕಾಣುವಂತೆ ಮಾಡಿದೆ. ಜತೆಯಲ್ಲಿ ಕುರಿಗಳನ್ನೂ ಸಾಕ್ತಿದ್ದಾರೆ.
ಮಂಜುನಾಥ್ ಆರ್. ಜಗತ್ತಿನ ದುಬಾರಿ ನಟ್ ಮೆಕಾಡೇಮಿಯಾ ಕೃಷಿಲಿ ಗೆದ್ದ ಸಾಧಕ. ಇವರು ಮೆಕಾಡೇಮಿಯ ಕೃಷಿ ಬಗ್ಗೆ ನೇಪಾಳ, ಭೂತಾನ್, ಮ್ಯಾನ್ಮಾರ್ ದೇಶಗಳಿಗೂ ಹೋಗಿ ಅಧ್ಯಯನ ಮಾಡಿದ್ದಾರೆ. ತಮ್ಮ 2 ಎಕರೆ ಜಮೀನಿನಲ್ಲಿ ಮೆಕಾಡೇಮಿಯಾ ಕೃಷಿ ಮಾಡಿ ಸಕ್ಸಸ್ ಆಗಿದ್ದಾರೆ. ಮೆಕಾಡೇಮಿಯ ಸೇರಿದಂತೆ 1500 ವಿವಿಧ ಹಣ್ಣುಗಳ ಸಸಿಗಳ ನರ್ಸರಿ ಮಾಡಿ ಲಾಭಗಳಿಸ್ತಿದ್ದಾರೆ.
ಸಂತೋಷ್, ಬೆಂಗಳೂರಲ್ಲಿ ಟೆರ್ರೆಸ್ ಗಾರ್ಡನ್ ಉದ್ಯಮ ಮಾಡಿ ಗೆದ್ದ ಸಾಧಕ. ಮೊದಲು ತಮ್ಮ ಮನೆಯ ಟೆರ್ರೇಸ್ನಲ್ಲಿ ಶುರುಮಾಡಿದ ತೋಟ ಕ್ರಮೇಣ ಬಿಸಿನೆಸ್ ಆಗಿ ಬದಲಾಯ್ತು. ಅದಕ್ಕೆ ಹ್ಯಾಪಿ ಗಾರ್ಡನ್ ಅಂತ ಹೆಸರಿಟ್ಟರು.. ಈ ಹ್ಯಾಪಿ ಗಾರ್ಡನ್ ಮೂಲಕ ಬೇರೆಯವರ ಟೆರ್ರೇಸ್ನಲ್ಲಿ ತೋಟ ಮಾಡಿಕೊಡ್ತಿದ್ದಾರೆ. 80 ಉದ್ಯೋಗಿಗಳಿರುವ ಈ ಉದ್ಯಮದಲ್ಲಿ 60 ಗ್ರಾಹಕರಿದ್ದಾರೆ ಲಕ್ಷ ಲಕ್ಷ ದುಡಿತಿದ್ದಾರೆ.
ಡಾ. ಮಧುಕೇಶ್ವರ ಜನಕ ಹೆಗ್ಡೆ,ದೇಶದ ಪ್ರಧಾನಿಯಿಂದ ಮನ್ ಕೀ ಬಾತ್ನಲ್ಲಿ ಪ್ರಶಂಸೆಗೊಂಡ ಕರುನಾಡಿನ ಹೆಮ್ಮೆಯ ರೈತ . ಜೇನು ಕೃಷಿಯಲ್ಲಿ, ವರ್ಷಕ್ಕೆ 60 ಲಕ್ಷಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ. ಜೇನು ಹಾಗು ಅದರ ಮೌಲ್ಯವರ್ಧನೆಯಲ್ಲಿ ಸುಮಾರು 36 ವರ್ಷಗಳ ಅನುಭವ ಹೊಂದಿರುವ ಮಧುಕೇಶ್ವರ ಅವರಿಗೆ ಪ್ರತಿ಼ಷ್ಟಿತ ಆರ್ಯಭಟ ಪ್ರಶಸ್ತಿ ಹಾಗು ಕೃಷಿ ಪಂಡಿತ ಪ್ರಶಸ್ತಿಗಳು ಹುಡುಕಿಕೊಂಡು
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom app online course on the topic of
How To Get A Good Yield in Organic Farming?
12 June 2023
ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್ಗಳು...